Sunday, May 10, 2009

ಅಕಟಕಟಾ...!: 40 ಮೀಟರ್ ಹಾರಬಲ್ಲೆ...!

ಕ್ಷಗಾನ ಆಟ ಕೂಟಗಳಲ್ಲಿ ಏನೋ ಹೇಳಬಾಕಾದಲ್ಲಿ ಬಾಯ್ತಪ್ಪಿ ಮತ್ತೇನೋ ಹೇಳುವುದು ಇದೆ.
ಇಂಥ ಅಚಾತುರ್ಯಗಳು ನಡೆದಾಗ ಸಹಕಲಾವಿದರು ಅದನ್ನು ಸರಿಪಡಿಸಿಕೊಂಡು ಹೋಗುತ್ತಾರೆ.
ಹಾಸ್ಯ ಕಲಾವಿದರಾದರೆ ಕೇಳುವುದೇ ಬೇಡ. ನಗೆಬುಗ್ಗೆ ಚಿಮ್ಮಿಸಿ ಬಿಡುತ್ತಾರೆ.
ಅದರಲ್ಲೂ ಹೊಸದಾಗಿ ರಂಗಪ್ರವೇಶ ಮಾಡುವವರಿಗೆ ಬಾಯ್ತಪ್ಪುವುದು ಜಾಸ್ತಿ. ಒಂದು ಬಾರಿ ಹೀಗೇ
ಆಗಿತ್ತು.
ಆಗಷ್ಟೇ ಯಕ್ಷಗಾನ ನಾಟ್ಯ, ಅರ್ಥಗಾರಿಕೆ ಕಲಿತು ರಂಗಪ್ರವೇಶ ಮಾಡುತ್ತಿದ್ದ ಹುಡುಗ. ಪ್ರಸಂಗ
ಸಮುದ್ರಲಂಘನ (ರಾಮಾಯಣದ ಉಪಪ್ರಸಂಗ).
ಸುಗ್ರೀವ ವಾನರ, ಭಲ್ಲೂಕ ಸೇನೆಯನ್ನು 4 ವಿಭಾಗ ಮಾಡಿ 4 ದಿಕ್ಕುಗಳಿಗೆ ಕಳುಹಿಸುತ್ತಾನೆ. ಇದರಲ್ಲಿ
ದಕ್ಷಿಣದತ್ತ ಹೊರಟ ಸೇನೆಗೆ ಸೀತೆ ಲಂಕೆಯಲ್ಲಿರುವ ವಿಚಾರ ತಿಳಿದುಬರುತ್ತದೆ. ಲಂಕೆಯಲ್ಲಿ ಸೀತೆ
ಇದ್ದಾಳೋ? ಇಲ್ಲವೋ? ಎಂಬುದನ್ನು ತಿಳಿಯಲು ಅಲ್ಲಿಗೇ ಹೋಗಬೇಕು. ಆಗ ಜಾಂಬವಂತ ಎಲ್ಲರನ್ನೂ
ನೀವೆಷ್ಟು ದೂರ ಹಾರಬಲ್ಲಿರಿ? ಎಂದು ಕೇಳುತ್ತಾನೆ.
ನಮ್ಮ ಹುಡುಗ ಅಂಗದನ ಪಾತ್ರಧಾರಿ. ಜಾಂಬವಂತನ ಪಾತ್ರದಲ್ಲಿದ್ದವರು ಮಹಾನ್ ಹಾಸ್ಯ ಕಲಾವಿದ
ಪೆರುವಡಿ ನಾರಾಯಣ ಭಟ್ಟರು.
ಸರಿ. ಜಾಂಬವಂತರು ಅಂಗದಲ್ಲಿ ಕೇಳಿದರು...
"ಅಂಗದಾ ನೀನೆಷ್ಟು ದೂರ ಹಾರಬಲ್ಲೆ?"
ಅಂಗದ ಉತ್ತರಿಸಿದ..."ಜಾಂಬವಂತರೇ... 40 ಮೀಟರ್ ಹಾರಬಲ್ಲೆ"
ಹಾಸ್ಯಕಲಾವಿದರು ಇಂಥ ವಿಷಯ ಸಿಕ್ಕರೆ ಬಿಟ್ಟಾರೆ? "ಅಂಗದ... 40 ಮೀಟರ್ ಹಾರಿದರೆ ಲಂಕೆಗೆ
ಬಿಡು, ಈ ಸಭೆಯಿಂದ ಹೊರ ಹೋಗುವುದಿಲ್ಲ" ಎಂದು ನೆರೆದವರನ್ನೆಲ್ಲ ನಗೆಗಡಲಲ್ಲಿ ಮುಳುಗಿಸಿದರು.
ಅಂಗದ ಪಾತ್ರಧಾರಿ ಮಾಡಿದಂಥ ಅಚಾತುರ್ಯಗಳು ಆಗಾಗ ನಡೆಯುತ್ತವೆ. ಅದು ಸಾಮಾನ್ಯ.
ಹಾಗಂತ, ತಪ್ಪುಗಳನ್ನು ತಿದ್ದಿಕೊಳ್ಳದೇ ಇರುವುದು ಸರಿಯಲ್ಲ.