Sunday, May 31, 2009

ಬಲ್ಲಿರೇನಯ್ಯ: ಚೆಂಡೆ ವಾದಕರು

ಕ್ಷಗಾನ ಹಿಮ್ಮೆಳದ ಮತ್ತೊಂದು ಪ್ರಮುಖ ಪಾತ್ರ ಚೆಂಡೆ ವಾದಕರದ್ದು. ಆಯಾ ರಾಗಕ್ಕೆ ತಕ್ಕುನಾಗಿ
ಚೆಂಡೆಯನ್ನು ನುಡಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಚೆಂಡೆ ವಾದಕರೂ ಸಾಕಷ್ಟು ಅಧ್ಯಯನ
ಮಾಡಬೇಕು.
ತೆಂಕುತಿಟ್ಟಿನ ಚೆಂಡೆಯನ್ನು ನಿಂತುಕೊಂಡು ಬಾರಿಸಲಾಗುತ್ತದೆ, ಚೆಂಡೆಯ ಎರಡೂ ಬದಿಯ ಅಗಲ
ಒಂದೇ. ತೆಂಕಿನ ಚೆಂಡೆ ನುಡಿಸುವುದು ಅಷ್ಟು ಸುಲಭವಲ್ಲ. ಹೆಗಲಿಗೇರಿಸಿಕೊಂಡು ಚೆಂಡೆಕೋಲಿನಿಂದ
ಚೆಂಡೆಗೆ ಬಾರಿಸಿದ ಮಾತ್ರಕ್ಕೆ ಅದರಿಂದ ಸ್ವರ ಹೊರಡುವುದಿಲ್ಲ.
ಚೆಂಡೆ ವಾದಕರು ರಾಗ ತಾಳಗಳ ಸ್ಪಷ್ಟ ಜ್ಞಾನ ಹೊಂದಿರಬೇಕು. ಎಲ್ಲೆಲ್ಲಿ ಯಾವ್ಯಾವುದು
ಬಳಸಬೇಕೆಂಬುದೂ ಅರಿವಿರಬೇಕು. ಇಲ್ಲವಾದಲ್ಲಿ ಚೆಂಡೆ ವಾದಕ ಸೋಲುವುದು ಖಂಡಿತ.
ಹಲವಾರು ಚೆಂಡೆವಾದಕರು ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಈಗಲೂ ಮಿಂಚುತ್ತಿರುವವರು
ಸಾಕಷ್ಟು ಮಂದಿ. ಇಹಲೋಕ ತ್ಯಜಿಸಿದರೂ ತಮ್ಮ ಪ್ರಭಾವವನ್ನು ಉಳಿಸಿರುವವರು ಬಹಳಷ್ಟು ಮಂದಿ
ಇದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗಷ್ಟೇ ನಿಧನರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.
ಕೆಲವು ಚೆಂಡೆವಾದಕರು: ಯಕ್ಷಗಾನ ಕ್ಷೇತ್ರದಲ್ಲಿ ಚೆಂಡೆವಾದಕರು ಬಹಳಷ್ಟು ಮಂದಿ ಇದ್ದಾರೆ. ಎಲ್ಲರ
ಹೆಸರನ್ನೂ ಉಲ್ಲೇಖಿಸುವುದು ಕಷ್ಟ. ಹಾಗಾಗಿ, ಸಂದರ್ಭಕ್ಕೆ ಅನುಗುಣವಾಗಿ ಕೆಲವು ಹೆಸರುಗಳನ್ನಷ್ಟೇ
ಪ್ರಸ್ತಾಪಿಸುತ್ತೇನೆ. ಎಲ್ಲಾ ಕಲಾವಿದರ ಬಗೆಗಿನ ಬರೆಹಗಳನ್ನೂ ಮುಂದಿನ ದಿನಗಳಲ್ಲಿ ಧೀಂಕಿಟದಲ್ಲಿ
ಓದಬಹುದು.
ಪ್ರಮುಖರು:
1. ಚಿಪ್ಪಾರು ಕೃಷ್ಣಯ್ಯ ಬಲ್ಲಾಳ
2.ಪದ್ಯಾಣ ಶಂಕರನಾರಾಯಣ ಭಟ್ಟ
3.ಆಡೂರು ಗಣೇಶ ರಾವ್
4.ದೇನಂತಮಜಲು ಸುಬ್ರಹ್ಮಣ್ಯ ಭಟ್ಟ
ಬರೆಹ: ಕಾರ್ತಿಕ್ ನಿಡ್ಲೆ