Sunday, May 24, 2009

ರಂಗಾಂತರಂಗ: ಹೊಸನಗರ ಮೇಳ


ತೀರಾ ಇತ್ತೀಚೆಗೆ ಆರಂಭವಾದ ಮೇಳಗಳ ಪೈಕಿ ಹೊಸನಗರ ಮೇಳ ಪ್ರಮುಖವಾದುದು.
ಶ್ರೀರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಈ ಮೇಳಕ್ಕೆ ಉಜಿರೆ
ಅಶೋಕ್ ಭಟ್ ವ್ಯವಸ್ಥಾಪಕರಾಗಿದ್ದಾರೆ.
ಪೌರಾಣಿಕ ಪ್ರಸಂಗಗಳನ್ನು ಸಮರ್ಥವಾಗಿ ಆಡುವವರು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲೇ ಜನ್ಮ
ತಳೆದ ಈ ಮೇಳ ಪೌರಾಣಿಕ ಜ್ಞಾನ ಹೊಂದಿರುವ ಹಲವಾರು ಕಲಾವಿದರನ್ನು ಒಳಗೊಂಡಿದೆ. ಹೀಗಾಗಿ,
ಪೌರಾಣಿಕ ಪ್ರಸಂಗಗಳನ್ನು ಆಡುವವರಿಲ್ಲ ಎಂಬ ಕೊರಗನ್ನು ಇದು ನಿವಾರಿಸಿದೆ.
ಪದ್ಯಾಣ ಗಣಪತಿ ಭಟ್ (ಭಾಗವತರು) ಮತ್ತಿತರ ಹಿಮ್ಮೇಳ ಕಲಾವಿದರ ತಂಡ ಮೇಳಕ್ಕೆ ಮೆರುಗು
ನೀಡಿದೆ. ಹಲವಾರು ಹಿರಿ-ಕಿರಿಯ (ಎಲ್ಲಾ ಹೆಸರುಗಳನ್ನೂ ಇಲ್ಲಿ ಉಲ್ಲೇಖಿಸುವುದ ಕಷ್ಟ. ಹೀಗಾಗಿ
ಮೇಳದ ಕಲಾವಿದರ ಬಗೆಗೆ ಮುಂದಿನ ದಿನಗಳಲ್ಲಿ ಬರೆಯಲಾಗುವುದು.) ಕಲಾವಿದರು ಮುಮ್ಮೇಳವನ್ನು
ಬೆಳಗುತ್ತಿದ್ದಾರೆ.
ಈಗಾಗಲೇ ನಾಡಿನೆಲ್ಲೆಡೆ ತನ್ನ ಛಾಪು ಬೀರಿರುವ ಹೊಸನಗರ ಮೇಳ, ರಾಘವೇಶ್ವರ ಶ್ರೀಗಳ
ನೇತೃತ್ವದಲ್ಲಿ ತನ್ನ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲಿ ಎಂಬುದು ಕಲಾಪ್ರೇಮಿಗಳ ಆಶಯ.
ಜೈ ಗುರುದೇವ.
ಲೇಖನ: ಸಂಗೀತಾ ಪುತ್ತೂರು