Sunday, June 21, 2009

ರಂಗಾಂತರಂಗ: ಸೂರಿಕುಮೇರಿ ಗೋವಿಂದ ಭಟ್ಟ


ಕ್ಷಗಾನದ ಮೇರುಪ್ರತಿಭೆಗಳ ಪೈಕಿ ಸೂರಿಕುಮೇರಿ ಗೋವಿಂದ ಭಟ್ಟರೂ ಒಬ್ಬರು. ಅವರು ಕೇವಲ
ಯಕ್ಷಗಾನ ಕಲಾವಿರಾಗಿಯಷ್ಟೇ ಮಿಂಚಿದವರಲ್ಲ. ಪ್ರಸಂಗಕರ್ತರಾಗಿಯೂ ಹಲವಾರು ಪ್ರಸಂಗಗಳನ್ನು
ರಚಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕೆ ಮನೆ ಎಂಬಲ್ಲಿ ಕೆ. ಶಂಕರನಾರಾಯಣ ಭಟ್ಟ ಮತ್ತು
ಕೆ. ಲಕ್ಷ್ಮೀ ಅಮ್ಮ ದಂಪತಿಯ ಪುತ್ರನಾಗಿ 1940ರ ಮಾರ್ಚ್ 22ರಂದು ಜನಿಸಿದ ಭಟ್ಟರು ಹೆಚ್ಚು
ವಿದ್ಯಾಭ್ಯಾಸ ಪಡೆದವರಲ್ಲ.
ವಿಟ್ಲದ ಕೋಡಪದವಿನಲ್ಲಿ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ ಗೋವಿಂದ ಭಟ್ಟರು
ಆಯ್ದುಕೊಂಡದ್ದು ಯಕ್ಷಗಾನ ಕ್ಷೇತ್ರವನ್ನು. ಭಟ್ಟರು ಕುರಿಯ ವಿಠಲ ಶಾಸ್ತ್ರಿಗಳಲ್ಲಿ ಯಕ್ಷಗಾನ
ನೃತ್ಯಾಭ್ಯಾಸವನ್ನೂ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಅವರಲ್ಲಿ ಹಲವಾರು
ಪ್ರಕಾರಗಳ ನೃತ್ಯಗಳನ್ನೂ ಅಭ್ಯಾಸ ಮಾಡಿದರು. 1951ರಲ್ಲಿ ಮೇಳಕ್ಕೆ ಸೇರಿದರು.
ಗೋವಿಂದ ಭಟ್ಟರ ಬಾಳಸಂಗಾತಿಯಾಗಿ ಬಂದ ಸಾವಿತ್ರಿ ಪತಿಯ ಕಲಾಸೇವೆಗೆ ತಮ್ಮ ಕೈಲಾದಷ್ಟು
ಪ್ರೋತ್ಸಾಹವನ್ನೂ ನೀಡಿದರು.
ಭಟ್ಟರು ಹಲವಾರು ಬಾರಿ ವಿದೇಶಗಳಿಗೆ ಪ್ರವಾಸ ಹೋಗಿ ಅಲ್ಲಿ ಯಕ್ಷಗಾನ ಆಟವನ್ನು ಆಡಿದ್ದೂ ಇದೆ.
ಅವರ ಜೀವನದ ಕೆಲವು ಮಹತ್ವದ ವಿವರಗಳು ಇಲ್ಲಿವೆ:
ತಿರುಗಾಟದ ಮೇಳಗಳು: ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ, ಧರ್ಮಸ್ಥಳ. ಪ್ರಸ್ತುತ ಧರ್ಮಸ್ಥಳ
ಮೇಳದ ಹಿರಿಯ ಕಲಾವಿದ.
ವಿದೇಶ ಪ್ರವಾಸ: ಅಬುಧಾಬಿ (1988), ದುಬೈ (1988), ಬಹ್ರೈನ್ (1991), ಜಪಾನ್ (1994)
ರಚಿಸಿದ ಪ್ರಸಂಗಗಳು: ಮಣಿಮೇಖಲೆ, ಕನಕಲೇಖೆ, ಕಾವೇರಿ ಮಹಾತ್ಮೆ, ಮೂರೂವರೆ ವಜ್ರಗಳು,
ರಾಜಶೇಖರ ವಿಲಾಸ, ನಹುಷೇಂದ್ರ, ಸಮ್ರಾಟ್ ಅಶೋಕ.
ಆತ್ಮಕಥನ: ಯಕ್ಷೋಪಾಸನೆ
ಲೇಖನ: ಈಶ್ವರಚಂದ್ರ ನಿಡ್ಲೆ