Sunday, September 13, 2009

ರಂಗಾಂತರಂಗ: ನಿಡ್ಲೆ ಮೇಳ

ಳೆಗಾಲದ ತಿರುಗಾಟದ ಮೇಳಗಳ ಪೈಕಿ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿ ಪ್ರಮುಖವಾದುದು. 1984ರ ಆಗಸ್ಟ್ 1ರಂದು ಕಲಾವಿದ ನಿಡ್ಲೆ ಗೋವಿಂದ ಭಟ್ಟ ಅವರ ನೇತೃತ್ವದಲ್ಲಿ ಆರಂಭವಾದ ಈ ಮೇಳಕ್ಕೆ ಈಗ 25ರ ಹರೆಯ.
ಕಳೆದ ತಿಂಗಳ (ಆಗಸ್ಟ್) 2ರಂದು ಮಂಗಳೂರಿನಲ್ಲಿ ನಿಡ್ಲೆ ಮೇಳವು ಬೆಳ್ಳಿಹಬ್ಬದ ಸಂಭ್ರಮ ಆಚರಿಸಿಕೊಂಡಿದೆ. ಪ್ರಸ್ತುತ ಹೈದರಾಬಾದಲ್ಲಿ ಮೇಳದ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದೇ ತಿಂಗಳ 27ರಂದು ಹೊಸಪೇಟೆಯಲ್ಲಿ ಬೆಳ್ಳಿಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಸತತ 25 ವರ್ಷಗಳಿಂದ ಹಿರಿ-ಕಿರಿಯ ಕಲಾವಿದರನ್ನು ಕಲಾವಿದರನ್ನು ಒಗ್ಗೂಡಿಸಿಕೊಂಡು ಮಳೆಗಾಲದಲ್ಲಿ ಮಾತ್ರ ನಿರುಗಾಟ ನಡೆಸುತ್ತಿರುವ ನಿಡ್ಲೆ ಮೇಳಕ್ಕೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೈದ್ರಾಬಾದ್, ವಿಶಾಖಪಟ್ಟಣಂ, ಚೆನ್ನೈ, ಕೊಯಮತ್ತೂರು, ಮುಂಬೈ, ಪುದುಚೇರಿ ಮತ್ತಿತರ ಹಲವಾರು ಕಡೆಯೂ ಅಭಿಮಾನಿಗಳ ಬಳಗ ಇದೆ. ಪ್ರತಿ ವರ್ಷವೂ ಈ ಎಲ್ಲ ಸ್ಥಳಗಳಲ್ಲೂ ಮೇಳ ತಿರುಗಾಟ ನಡೆಸಿ, ಯಕ್ಷಗಾನ ಆಟ ಆಡುತ್ತದೆ.
ಮೇಳದಲ್ಲಿ ನಿಡ್ಲೆ ಗೋವಿಂದ ಭಟ್ಟ, ನಾರಾಯಣ ಭಟ್ಟ, ಸುಬ್ರಾಯ ಹೊಳ್ಳ, ಕುಂಬ್ಳೆ ಶ್ರೀಧರ ರಾವ್, ಕೆದಿಲ ಜಯರಾಮ ಭಟ್ಟ, ಈಶ್ವರಪ್ರಸಾದ್, ಗಂಗಾಧರ ಪುತ್ತೂರು, ವಸಂತ ಕಾಯರ್ತಡ್ಕ, ಶಿವಶಂಕರ ಭಟ್ಟ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರಭಾಕರ ಘೋರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ ಮತ್ತಿತರ ಹಿರಿ-ಕಿರಿಯಯ ಕಲಾವಿದರು ಯಕ್ಷಗಾನ ಕಲಾಸೇವೆ ಮಾಡುತ್ತಿದ್ದಾರೆ. ಈ ಮೇಳೆ ತನ್ನ ಕಲಾ ಸೇವೆಯನ್ನು ಮುಂದುವರಿಸಲಿ ಎಂಬುದು ಧೀಂಕಿಟ ಬಳಗದ ಹಾರೈಕೆ.

ಯಾರಾದರೂ ಆಟ ಆಡಿಸಬೇಕೆಂದು ಬಯಸಿದಲ್ಲಿ ನಾರಾಯಣ ಭಟ್ಟ ನಿಡ್ಲೆ, ಮೊ-9448976869 ಇವರನ್ನು ಸಂಪರ್ಕಿಸಬಹುದು.