Sunday, July 19, 2009

ರಂಗಾಂತರಂಗ: ಕೊಕ್ಕಡ ಈಶ್ವರ ಭಟ್ಟ




ಕಾಸರಗೋಡೂ ಸೇರಿದಂತೆ ದಕ್ಷಿಣೋತ್ತರ ಜಿಲ್ಲೆಗಳ ಜೀವಾಳವಾಗಿರುವ ಯಕ್ಷಗಾನದ ತೆಂಕು-ಬಡಗು
ತಿಟ್ಟುಗಳಲ್ಲಿ ಸ್ತ್ರೀಪಾತ್ರಕ್ಕೆ ಜೀವ ತುಂಬಿದ ಪ್ರಮುಖರಲ್ಲಿ ಕೊಕ್ಕಡ ಈಶ್ವರ ಭಟ್ಟರೂ ಒಬ್ಬರು. ನಯ
ನಾಜೂಕಿನ ಸ್ತ್ರೀಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ ಭಟ್ಟರು ಪ್ರಸ್ತುತ ನಿವೃತ್ತಿ ಜೀವನ
ನಡೆಸುತ್ತಿದ್ದಾರೆ.
ಆಗಿನ ಪುತ್ತೂರು ತಾಲೂಕಿನ (ಈಗ ಬಂಟ್ವಾಳ ತಾಲೂಕು) ಅಳಿಕೆ ಗ್ರಾಮದ ಮುಳಿಯ
ಕಡೆಂಗೋಡ್ಲುವಿನಲ್ಲಿ ಕೆ. ಮಹಾಲಿಂಗ ಭಟ್ಟ ಮತ್ತು ಪರಮೇಶ್ವರಿ ದಂಪತಿಯ ಪುತ್ರನಾಗಿ 1941ರಲ್ಲಿ
ಜನಿಸಿದ ಭಟ್ಟರು 6ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದರು.
ಬದುಕು ನಡೆಸುವ ಅನಿವಾರ್ಯತೆಯಿಂದ ತಮ್ಮ 15-16ರ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ
ಧುಮುಕಿದರು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಮೂಲ್ಕಿ, ಸಾಲಿಗ್ರಾಮ ಸೇರಿದಂತೆ ಹಲವಾರು
ಮೇಳಗಳಲ್ಲಿ ಕರ್ತವ್ಯ ನಿರ್ವಹಿಸಿದ ಭಟ್ಟರು ಪ್ರಸ್ತುತ ಕೊಕ್ಕಡ ಸಮೀಪದ ಹೆನ್ನಾಳ ಎಂಬಲ್ಲಿ
ವಾಸವಾಗಿದ್ದಾರೆ.
ಇತ್ತೀಚೆಗಷ್ಟೇ ಹೃದಯದ ಬೈಪಾಸ್ ಸರ್ಜರಿ ಮಾಡಿಸಿಕೊಂಡ ಕಾರಣ ಭಟ್ಟರು ವೃತ್ತಿ ಜೀವನಕ್ಕೆ
ವಿದಾಯ ಹೇಳಿದ್ದಾರೆ.
ಲೇಖನ: ಕಾವ್ಯಶ್ರೀ